ಶನಿವಾರ, ಡಿಸೆಂಬರ್ 17, 2016

      'ಕುದುರೆ ಬಾಲ'ದಿಂದ ಸ್ವಾವಲಂಬಿ

           ಬರಹ: ಕೂಡಂಡ ರವಿ


ಬಹುತೇಕ ಕೃಷಿಕರು ವಿವಿಧ ಕರಿಮೆಣಸಿನ ತಳಿಯನ್ನು ಬೆಳೆಸಿದ್ದಾರೆ. ಅಕ್ಕಪಕ್ಕದವರ ಮನೆ- ತೋಟಗಳಲ್ಲಿ ನೋಡಿದ್ದಾರೆ. ವಿಯಾಟ್ನಾಂ, ಕಾಂಬೋಡಿಯಾಗಳಲ್ಲಿ ಪೊದರು ಕಾಳುಮೆಣಸು ಬಳ್ಳಿಗಳು ಬಹು ಜನಪ್ರಿಯ. ನಮ್ಮಲ್ಲಿ ಈ ರೀತಿಯ ಪ್ರಯೋಗಗಳು ನಡೆದೇ ಇಲ್ಲ. ಅಥವಾ ತೀರಾ ಕಡಿಮೆ ಎನ್ನಬಹುದು. ಕೇವಲ ಮುಕ್ಕಾಲು ಎಕರೆ ಪ್ರದೇಶದಲ್ಲಿ ಬರೇ ಕಾಳುಮೆಣಸು ಬಳ್ಳಿಯಿಂದಲೇ ಸ್ವಾವಲಂಬಿಯಾಗಿ ಜೀವಿಸುತ್ತಿರುವ ಕೇರಳದ ಪ್ರಗತಿಪರ ಕೃಷಿಕರ ಯಶೋಗಾಥೆ ಇಲ್ಲಿದೆ. ಓದಿ.



ಇವು ಅವೆಲ್ಲಕ್ಕಿಂತ ವಿಭಿನ್ನ ತಳಿ ಕುದುರೆ ಬಾಲ ಎಂಬ ಹೆಸರಿನ ಕರಿಮೆಣಸಿನ ತಳಿ. ನೆರೆಯ ರಾಜ್ಯ ಕೇರಳದ ಇಡುಕ್ಕಿ ಜಿಲ್ಲೆಯ ಸಣ್ಣ ಹಿಡುವಳಿದಾರ ಜೋಸ್ ಅವರು  ಈ ಅಪೂರ್ವ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ವೈಶಿಷ್ಟ್ಯಮಯ ತಳಿಗೆ ಅವರು ಇಟ್ಟ ಅಪೂರ್ವ ಹೆಸರು ಕುದುರೆವಾಲ್ ಹಾಗಂದರೆ, ಮಲೆಯಾಳ ಭಾಷೆಯಲ್ಲಿ ಕುದುರೆಯ ಬಾಲ ಎಂಬ ಅರ್ಥವಿದೆ.
ಆ  ತಳಿಯ ಮೂಲ  ಪೂರ್ವಜರ ಕಾಲದಿಂದಲೇ ಅವರ ಜಮೀನಿನಲ್ಲೇ ಇತ್ತಂತೆೆ ! ಇದು ಇತರ ತಳಿಗಿಂತ ಉದ್ದವಾಗಿರುತ್ತದೆ. ಜಳ್ಳಿನ ಪ್ರಮಾಣ ತೀರಾ ಕಡಿಮೆ. ಆದರೇ, ಒಂದೇ ಮೈನಸ್ ಪಾಯಿಂಟ್ ಇದಕ್ಕೆ ಕಾಯಿಲೆಗಳನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಅಥವಾ ಇಲ್ಲವೇ ಇಲ್ಲ. ಈ ತಳಿಯ ಈ ಗುಣದಿಂದಾಗಿ ಈ ವೈಶಿಷ್ಟ್ಯಮಯ ತಳಿಯನ್ನು ಅಭಿವೃದ್ಧಿ ಪಡಿಸಲು ಅವರಿಗೆ ಮನಸ್ಸೇ ಬರಲಿಲ್ಲವಂತೆ!



ಕೆಲವರ್ಷಗಳ ಹಿಂದೆ ಅವರು ಈ ತಳಿಯನ್ನು ಕಾಡುಹಿಪ್ಪಲಿ ಗಿಡಕ್ಕೆ ಕಸಿ ಮಾಡಿ ಅಭಿವೃದ್ಧಿಪಡಿಸಿದರು. ಮೊದಮೊದಲು ಅದರಲ್ಲಿ ಯಶಸ್ಸು ಸಾಧಿಸದಿದ್ದರೂ, ಅವರ ಪ್ರಯತ್ನಕ್ಕೆ ಫಲ ನಂತರ ಸಿಕ್ಕಿತು. ನಂತರದ ದಿನಗಳಲ್ಲಿ ಇದನ್ನು ಛಲವಾಗಿ ಸ್ವೀಕರಿಸಿದ ಅವರು, ಅದನ್ನು ವಾಣಿಜ್ಯ ಉದ್ಧೇಶಕ್ಕಾಗಿ ಪರಿವ.ರ್ತಿಸದರು.  ಈ ತಳಿಯ ಬಳ್ಳಿಗಳನ್ನು ಪೊದರು ಗಿಡವಾಗಿ ಮಾರ್ಪಡಿಸಿದರು. ಅಕ್ಕ ಪಕ್ಕದ ಜನತೆ ಇದನ್ನು ಕಂಡು ಆಶ್ಚರ್ಯಚಕಿತರಾಗುವುದರ ಜೊತೆಗೆ ಖರೀದಿಸಿ ತಾವು ನೆಟ್ಟರು. ಜೋಸ್ ಅವರ ಬಳಿ ಈ ತಳಿಯ ಸುಮಾರು 100ಕ್ಕೂ ಅಧಿಕ ಮರವೇರುವ ಬಳ್ಳಿಗಳಿವೆ. ಇದರಲ್ಲಿ ಸುಮಾರು 200ಕೆ.ಜಿ. ಮೆಣಸು ಕೊಯ್ಲು ಮಾಡಿದ್ದಾರೆ. ಪ್ರತಿ ಬಳ್ಳಿಯಿಂದ ಇವರಿಗೆ ಸರಾಸರಿ 2-3 ಕೆ.ಜಿ. ಒಣ ಕರಿಮೆಣಸು ಸಿಗುತ್ತದೆ. ಹಲವಾರು ಕರಿಮೆಣಸಿನ ತಳಿಗಳು ವರ್ಷವೂ ಸರಾಸರಿ ಮೆಣಸನ್ನು ಕೊಡುವುದಿಲ್ಲ. ಆದರೆ, ಈ ಬಳ್ಳಿ ಹಾಗಲ್ಲ. ಇದು ವಾರ್ಷಿಕ ಎರಡು ಬಾರಿ ಇಳುವರಿ ನೀಡುತ್ತದೆ ! . ಒಂದು ಬಾರಿ ಕಡಿಮೆ ಇಳುವರಿ ನೀಡಿದರೆ, ಮತ್ತೊಮ್ಮೆ ಅಧಿಕ. ಇಡುಕ್ಕಿ ಜಿಲ್ಲೆಯ ತಡಿಯಂಪಾರ್ ಅಲ್ಲಿನ ಜನತೆ ಹೆಚ್ಚು ಪರಿಚಿತ. ಅಲ್ಲಿಗೆ ಸಮೀಪದಲ್ಲಿಯೇ ಜೋಸ್ ಅವರ ಮನೆ ಇದೆ. ಅವರು ಕೇವಲ ಮುಕ್ಕಾಲು ಎಕರೆ ಜಮೀನು ಮಾತ್ರ ಹೊಂದಿದ್ದಾರೆ. ಅಲ್ಲಿಯೇ ಅವರು ವೈಶಿಷ್ಟ್ಯಮಯ ಕುದುರೆವಾಲ್ ತಳಿಯ ಕರಿಮೆಣಸಿನ ಬಳ್ಳಿಗಳನ್ನು ಮಾರುತ್ತಿದ್ದಾರೆ. ನೇರವಾಗಿ ಮರಕ್ಕೆ ಹಬ್ಬಿಸುವ ಬಳ್ಳಿಯ ಪೊಟ್ಟಣಕ್ಕೆ ನೂರು ರೂಪಾಯಿ. ಕಸಿ ಕಟ್ಟಿದ ಪೊದೆ (ಬುಶ್) ಕಾಳುಮೆಣಸಿನ ಬಳ್ಳಿಗೆ 200 ರೂಪಾಯಿಗಳು.
ನಮ್ಮ ಜಿಲ್ಲೆಯಲ್ಲಿಯೂ ಪೊದರು ಕಾಳು ಮೆಣಸು ಬೆಳೆಯುವುದರಿಂದ  ಅಪಾರ ವರಮಾನ ಗಳಿಸುವ ಹೇರಳ ಅವಕಾಶಗಳಿವೆ. ಇಂತಹ ಕೃಷಿ ಅನುಭವಗಳನ್ನು ನಾವು ಬಳಸಿಕೊಂಡಲ್ಲಿ ನಾವು ಸ್ವಾವಲಂಬಿಗಳಾಗಬಹುದಾಗಿದೆ. ಆದರೆ, ನಮ್ಮ ಕೃಷಿಕರು ಈ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ.
(ಆಧಾರಿತ ಬರಹ)
                                                    ಜೋಸ್ ಅವರ ದೂರವಾಣಿ ಸಂಖ್ಯೆ- 8547405132