ಭಾನುವಾರ, ಜುಲೈ 22, 2018

ಸಾವಯವದ ಸಂಗ-ಖಚರ್ಿಗೆ ಭಂಗ....!

             ಸಾವಯವದ ಸಂಗ-ಖರ್ಿಗೆ ಭಂಗ....! 



                      ಸಚಿತ್ರ ಬರಹ: ಕೂಡಂಡ ರವಿ, ಹೊದ್ದೂರು. ಕೊಡಗು. 

ಸಾಕಷ್ಟು ರೈತಾಪಿ ವರ್ಗದವರು ಸಾವಿರಾರು ರೂಪಾಯಿ ಸಾಲ ಸೋಲ ಮಾಡಿ ರಾಸಾಯನಿಕ ಗೊಬ್ಬರವನ್ನು ವಿವಿಧ ಬೆಳೆಗಳಿಗೆ ಬಳಸುತ್ತಾರೆ. ಹೆಚ್ಚು ರಾಸಾಯನಿಕ ಗೊಬ್ಬರ ಸುರಿದು ಹೆಚ್ಚು ಇಳುವರಿಯನ್ನು ನಿರೀಕ್ಷಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ರೈತಾಪಿ ವರ್ಗದವರು ಕನಸು ನುಚ್ಚು ನೂರಾಗುವುದೇ ಹೆಚ್ಚು. ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವವರು ಕೆಲವರು. ಅಂತಹ ಸಾಧರ ಮಾಹಿತಿ ಇಲ್ಲಿದೆ ನೋಡಿ.

 ಸಾವಯವ ಖಚರ್ು ಕಡಿಮೆ 

ಆದರೆ, ಬಿಜಾಪುರ ಬಳಿಯ ಮಹಾರಾಷ್ಟ್ರ ರಾಜ್ಯದ ಬುದ್ರಕ್ನ ಜಾಲಿಹಾಳ್ ನಿವಾಸಿ.  ಮೂಲತಃ ಆಂಧ್ರಪ್ರದೇಶದವರು.  ನಿವೃತ್ತ ವಾಯುಪಡೆಯ ಅಧಿಕಾರಿ.  ಕನ್ನಡಿಗ ರೈತ ಶ್ರೀನಿವಾಸ್ ರಾವ್ ಇದಕ್ಕೆ ಅಪವಾದ. ಇವರು ಸಾವಯುವ ಕೃಷಿಯನ್ನು ಕಳೆದ 5 ವರ್ಷಗಳಿಂದ ಮಾಡುತ್ತಿದ್ಧಾರೆ. ಕೃಷಿಗೆ ಅತ್ಯಂತ ಕಡಿಮೆ ಖಚರ್ು ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇದರಿಂದ ಲಾಭವೂ ಹೆಚ್ಚಾಗುತ್ತಿದೆಯಂತೆ ! ಇದಕ್ಕೆ ಪ್ರಮುಖ ಕಾರಣ ಖಚರ್ು ಕಡಿಮೆ.
ನಾರಾಯಣ ರೆಡ್ಡಿ ಸಲಹೆ 
ಇವರು 5 ವರ್ಷಗಳಿಂದ ಸಾವಯವ ಕೃಷಿಯತ್ತ ವಾಲಿದ್ದಾರೆ. ಮುನ್ನಾ ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದರಂತೆ. ಅದರಿಂದ ಖಚರ್ು ಹೆಚ್ಚು,  ಮಣ್ಣಿನ ಮತ್ತು ಕೃಷಿ ಉತ್ಪನ್ನಗಳ ಬಳಕೆದಾರರ  ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುವುದನ್ನು ಮನಗಂಡರು. ಬಳಿಕ  ಶ್ರೀನಿವಾಸ್ ಸಾವಯವ ಪದ್ಧತಿಯಲ್ಲಿ 40 ವರ್ಷಗಳಿಂದ ಕೃಷಿ ಮಾಡುತ್ತಿರುವ ಬೆಂಗಳೂರಿನ ನಾರಾಯಣ್ ರೆಡ್ಡಿ ಅವರನ್ನು ಭೇಟಿ ಮಾಡಿದರು. ಅವರ ಆಶಯದಂತೆ, ಇವರೂ ಪ್ರಯತ್ನ ಮುಂದುವರಿಸಿದ್ದಾರೆ.

ಮಲೆನಾಡಿನ ದಿನದ ಮಳೆ - ವರ್ಷಕ್ಕೆ !
ಸುಮಾರು ಒಂದು ಏಕರೆಗೂ ಅಧಿಕ ವಿಸ್ತೀರ್ಣದ ಕೃಷಿ ಹೊಂಡವನ್ನು ಇವರು ನಿಮರ್ಿಸಿಕೊಂಡಿದ್ದಾರೆ. ಇದು 22 ಅಡಿಗೂ ಅಧಿಕ ಆಳವಿದೆ. ಅದರಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.   ಕಾಡು,  ನೀರಿಲ್ಲದ ನಾಡಿನಲ್ಲಿ ಮಳೆ ತೀರಾ ಅಪೂರ್ವ, ಇಲ್ಲ ಕಡಿಮೆಯೇ. ಕೊಡಗು ಅಥವಾ ಮಲೆನಾಡು ಪ್ರದೇಶದಲ್ಲಿ ಒಂದು ದಿನಕ್ಕೆ ಬೀಳುವ ಮಳೆ ಇಲ್ಲಿ ಇಡೀ ವರ್ಷಕ್ಕೆ ಬರುತ್ತದೆಯಂತೆ !  ಇವರ ಬಳಿ ಮಳೆಮಾಪಕ ಇಲ್ಲದ ಕಾರಣ ನಿಖರವಾದ ಅಂಕಿ ಅಂಶಗಳು ಲಭ್ಯವಾಗಲಿಲ್ಲ.



ಮಿಶ್ರ ಬೆಳೆ ಪದ್ಧತಿ 
ತಮ್ಮ 18 ಏಕರೆ ಪ್ರದೇಶದಲ್ಲಿ ದಾಳಿಂಬೆ ಮತ್ತು ದ್ರಾಕ್ಷಿ ಪ್ರಮುಖ ಬೆಳೆಗಳು.  ಇವುಗಳ ಜೊತೆಗೆ ಅಲಸಂಡೆ, ಹೆಸರು, ನುಗ್ಗೆ, ಪಪ್ಪಾಯಿ, ತೊಗರಿ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿರುವರು. ಹೊಲದ ಬದುಗಳ ತುಂಬೆಲ್ಲಾ ಬೇವಿನ ಮರಗಳು ಮತ್ತು ಆನೆ ಹುಲ್ಲು. ವಿವಿಧ ಬೆಳೆಗಳಿಗೆ ಸಾವಯವ ಗೊಬ್ಬರ ಮತ್ತು ಜೀವಾಮೃತವನ್ನು ನಿರಂತರವಾಗಿ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಬರದ ಬೆಂಗಾಡಿನ ನಾಡಿನಲ್ಲಿ ಮಲೆನಾಡಿನಂತೆ ಹಸಿರು ನಳನಳಿಸುತ್ತಿದೆ.
ಕ್ರಿಮಿನಾಶಕಗಳ ಸಿಂಪಡಣೆಯೇ ಇಲ್ಲ !
ಹೊಲದಲ್ಲಿ ಕೀಟಗಳ ಹಾವಳಿ ತಡೆಗಾಗಿ 10 ಸೋಲಾರ್ ಕೀಟ ನಾಶಕ ಯಂತ್ರಗಳನ್ನು ಅಳವಡಿಸಿದ್ದಾರೆ. ಪರಿಣಾಮ ಇವರು ಯಾವುದೇ ಬೆಳೆಗಳಿಗೂ ಕೀಟನಾಶಕ ಸಿಂಪಡಣೆಯ ಶ್ರಮ, ಖಚರ್ು, ಮಣ್ಣಿನ ಆರೋಗ್ಯ ಹಾಳಾಗುವುದು ತಪ್ಪಿದೆ. 8 ಏಕರೆ ಪ್ರದೇಶದ ದ್ರಾಕ್ಷಿ ಬೆಳೆಗೆ ಕೇವಲ 4 , ಅದರಂತೆ ದಾಳಿಂಬೆ ಬೆಳೆಗೆ 4 ಸೋಲಾರ್ ಕೀಟನಾಶಕ ಯಂತ್ರಗಳನ್ನು ಬಳಸುತ್ತಿರುವರು. ಉಳಿದೆಡೆಗಳಲ್ಲಿ 2 ಸೋಲಾರ್ ಕೀಟನಾಶಕ ಯಂತ್ರಗಳಿವೆ.
ಜೀವಾಮೃತವೇ ಪ್ರಮುಖ ಆಧಾರ. 
ಇವರ ಎಲ್ಲಾ ಬೆಳೆಗಳಿಗೂ ಜೀವಾಮೃತವೇ ಪ್ರಮುಖ ಗೊಬ್ಬರ. ಕೃಷಿ ಹೊಂಡದ ಕೆಳ ಭಾಗದಲ್ಲಿ ಹೊಲದ ಮೇಲ್ಭಾಗದಲ್ಲಿ ಜೀವಾಮೃತ ತೊಟ್ಟಿ ಮತ್ತು ವಿತರಣಾ ಘಟಕವನ್ನು ನಿಮರ್ಿಸಿದ್ಧಾರೆ. ಅಲ್ಲಿಂದಲೇ ನೇರವಾಗಿ ನೀರಿನೊಡನೆ ಬೆರೆತ ಜೀವಾಮೃತವು ತೋಟದ ಮೂಲೆ ಮೂಲೆಗಳಲ್ಲಿರುವ ಗಿಡ, ಮರ, ಬಳ್ಳಿಗಳಿಗೆ ಪೂರೈಕೆಯಾಗುತ್ತದೆ. ಯಾಂತ್ರೀಕರಣದ ಮೂಲಕ ಜೀವಾಮೃತವನ್ನು ಕಲಸಲಾಗುತ್ತದೆ. ಜೀವಮೃತದ ಉಳಿಕೆಯನ್ನು ನೇರವಾಗಿ ಗೊಬ್ಬರವಾಗಿ ಪರಿವತರ್ಿಸಲು ಅನುವು ಮಾಡಲಾಗಿದೆ. ಇದರ ಪರಿಣಾಮವಾಗಿ ಒಣ ಪ್ರದೇಶವಾದ ಇಲ್ಲಿ ಹಸಿರು ನಗುನಗುತ್ತಿದೆ.
 ಕಳೆಯೇ ಗೊಬ್ಬರ
 ಇವರ ತೋಟದಲ್ಲಿ ಯಾವುದೇ ಕಳೆಯೂ ಇಲ್ಲ. ಅಂದರೇ, ಎಲ್ಲವೂ ಗೊಬ್ಬರವೇ . ಕಳೆಯನ್ನು ಗೊಬ್ಬರವಾಗಿ ಪರಿವತರ್ಿಸುವ ಕಲೆ ಇವರಿಗೆ ಸಿದ್ಧಿಸಿದೆ. ಅವರ ತೋಟದಲ್ಲಿ ಕೆಲವು ಪಾಥರ್ೆನಿಯಂ ಗಿಡಗಳಿದ್ದವು. ಅವನ್ನು ಕಂಡು ಇದು ಕಳೆಯಲ್ಲವೇ ? ಏಕೆ ಕೀಳುತ್ತಿಲ್ಲ ನೀವು ? ಎಂದೆ. ಅದೂ ಗೊಬ್ಬರವೇ. ವಿವಿಧ ಗಿಡ ಮರಗಳಿಂದ ಮಣ್ಣು ಹೊನ್ನಾಗುವುದು. ಎಲ್ಲವೂ ಮಣ್ಣನೊಂದಿಗೆ ಬೆರೆತು ಗೊಬ್ಬರವಾಗುತ್ತದೆ. ಎಂದರು.

 8 ಲಕ್ಷ  ಉಳಿತಾಯ
ಸಾವಯವ ಕೃಷಿ ಮಾಡುತ್ತಿರುವುದರಿಂದಾಗಿ ರಾಸಾಯನಿಕ ಗೊಬ್ಬರಗಳಿಗಾಗಿ ವೆಚ್ಚ ಮಾಡುತ್ತಿದ್ದ ಹಣ ವಾಷರ್ಿಕ ಸುಮಾರು 6 ರಿಂದ 8 ಲಕ್ಷ ಉಳಿತಾಯವಾಗಿದೆಯಂತೆ ! ಆದರೆ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ವಾಷರ್ಿಕ 80 ಲಕ್ಷ ಆದಾಯ ಬರುತ್ತಿತ್ತು. ಅದು ಈಗ 20 ಲಕ್ಷದಷ್ಟು ಕುಸಿದಿದೆ. ನಿಧಾನವಾಗಿ ಆದಾಯದ ಸರಾಸರಿ ಪ್ರತಿ ವರ್ಷವೂ ಏರುತ್ತಿದೆ. ಖಚರ್ು ಕಡಿಮೆಯಾಗುತ್ತಿದೆ ಎಂದು ಹೇಳುವಾಗ ಶ್ರೀನಿವಾಸ್ ಅವರ ಮೊಗದಲ್ಲಿ ಸಂತಸದ ಕಳೆ ಮಿನುಗುತ್ತಿತ್ತು.
ರಾಸಾಯನಿಕ ಮುಕ್ತ ಏಕೆ ? 
ಗಿಡಗಳಿಗೆ ರಾಸಯನಿಕ ಗೊಬ್ಬರ, ಕೀಟ ನಾಶಕ ಬಳಸುವುದರಿಂದ ಅದನ್ನು ಆಹಾರವಾಗಿ ಬಳಸುವವರಿಗೆ ವಿಷ ಉಣಿಸಿದಂತಾಗುತ್ತದೆ. ಇದರಿಂದ ಜನತೆಯನ್ನು ಪಾರು ಮಾಡಲು, ಮುಂದಿನ ಪೀಳಿಗೆಗಾಗಿ ಅರೋಗ್ಯವಂತ ಮಣ್ಣನ್ನು ಉಳಿಸಲು ತಾನು ಕೈಲಾದ ಶ್ರಮ ಪಡುತ್ತಿರುವೆನು ಎಂದು ಅವರು ನುಡಿದರು.
ಗ್ಲಿರೀಸಿಡಿಯಾ-ಹೊಂಗೆಗಳಲ್ಲಿ ಆಸಕ್ತಿ 

ಅಪಾರ ಪ್ರಮಾಣದಲ್ಲಿ ಅಲ್ಪ ಅವಧಿಯಲ್ಲಿ ಹಸಿರೆಲೆಗಳನ್ನು ನೀಡಬಲ್ಲ ಗ್ಲಿರೀಸೀಡಿಯಾ ಮತ್ತು ಹೊಂಗೆ ಮರವನ್ನು ಹೊಲಗಳ ಬದುಗಳಲ್ಲಿ ಬೆಲೆಯುವ ಆಸಕ್ತಿ ಇವರದ್ದು. ಒಮ್ಮೆ ಗ್ಲಿರೀಸಿಡಿಯಾ ಬೀಜಗಳನ್ನು ಅರಸುತ್ತಾ ಶಿರಸಿಗೂ ಹೋಗಿದ್ದರೂ, ಬೀಜಗಳೇ ಸಿಗಲಿಲ್ಲ ಎಂದು ಬೇಸರಿಸಿದರು.
ಯಾರಿಗಾದರೂ ಗ್ಲಿರೀಸಿಡಿಯಾ ಬೀಜ ಬೇಕಾದಲ್ಲಿ ಸಂಪಕರ್ಿಸಿ- 83101 30887


ಶ್ರೀನಿವಾಸ್ ಅವರ ಮೊಬೈಲ್ : 9880727880
                          9860359626.