ಬುಧವಾರ, ಮಾರ್ಚ್ 1, 2017

ಗಾಲಿಗಳ ಮೇಲೆ ಚಿನ್ನದ ರಥ-

                             'ಗೋಲ್ಡನ್ ಚಾರಿಯೇಟ್' 

                                            ಬರಹ- ಕೂಡಂಡ ರವಿ



ನಾವು ಸರ್ವೆ ಸಾಮಾನ್ಯ ರೈಲುಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಹಲವಾರು ಮಂದಿ ರೈಲಿನಲ್ಲಿ ಪ್ರಯಾಣ ಮಾಡಿರುತ್ತೇವೆ. ಬಹುಶ್ಯ ಕೊಡಗಿನ ಬಹುತೇಕ ಮಂದಿಗೆ ಇನ್ನೂ ರೈಲು ಪ್ರಯಾಣ ಗಗನ ಕುಸುಮವೇ ಸರಿ. ನಾವು ಮಡಿಕೇರಿ ರಾಜಾಸೀಟ್ ಬಳಿಯ ಪುಟಾಣಿ ರೈಲಿನಲ್ಲಿ ಮಕ್ಕಳೊಡನೆ ಮಕ್ಕಳಾಗಿ ಒಂದೆರಡು ಸುತ್ತು ಸಾಗಿದ್ದೆ- ಸಾಗಿದ್ದು.  ಮಡಿಕೇರಿ ಆಕಾಶವಾಣಿಯಲ್ಲಿ  ಶೋತೃಗಳ ಮನೆಗೆ ಮನಕ್ಕೆ ಲಗ್ಗೆಯಿಡುವ ಮತ್ತೊಂದು ವಿಶಿಷ್ಟವಾದ ರೈಲಿದೆ. ಅದೇ ರೀತಿ ವಿಭಿನ್ನವಾದ ಮತ್ತೊಂದು ರೈಲಿದೆ. ಅದೇ ಗೋಲ್ಡನ್ ಚಾರಿಯೇಟ್ !



ಐಷಾರಾಮಿ ರೈಲು
ಈ ವಿಶಿಷ್ಟಮಯ ರೈಲು ಕರ್ನಾಟಕ -ಗೋವಾ, ಸಂಪರ್ಕಿಸುತ್ತದೆ. . ರೈಲು ಕನ್ನೇರಳೆ ಮತ್ತು ಬಂಗಾರದ ಬಣ್ಣದಿಂದ ಕೂಡಿದೆ. ಇದು ಆನೆಯ ತಲೆ ಸಿಂಹದ ಶರೀರ ಹೊಂದಿರುವ ಅಪೂರ್ವ ಲಾಂಛನವನ್ನು ಹೊಂದಿದೆ. ಅತ್ಯಂತ ಉತ್ಕೃಷ್ಟ ಗುಣಮಟ್ಟದ ಅರಮನೆ ಸಾಲುಗಳ ಸುಂದರ ವಸತಿ, ವಿಶಿಷ್ಟಮಯ ಚಿಕಿತ್ಸಾ ಸೌಲಭ್ಯಗಳು, ಜೊತೆಗೆ ಊಟೋಪಚಾರವನ್ನೂ ಕೂಡ ಹಳಿಯ ಮೇಲೆ
ಇದು ತನ್ನ ವಿಭಿನ್ನತೆಯಿಂದಾಗಿ ಏಷ್ಯಾದಲ್ಲಿಯೇ ಪ್ರಮುಖ ಐಷಾರಾಮಿ ರೈಲು ಎಂಬ ಕೀತರ್ಿಗೆ ಭಾಜನವಾಗಿದೆ.ಇದು ಕನರ್ಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ಮತ್ತು ಮ್ಯಾಪಲ್ ಸಮೂಹ ಸಂಸ್ಥೆಗಳು ಸೇರಿ ನಿರ್ವಹಿಸುತ್ತಿವೆ
.



ವೈಶಿಷ್ಟ್ಯಮಯ ಹೆಸರುಗಳು
ಈ ರೈಲಿನಲ್ಲಿ ಕೇವಲ 11 ಬೋಗಿಗಳು ಮಾತ್ರ ಇವೆ. ಇವುಗಳಿಗೆ ಕನರ್ಾಟಕವನ್ನು ಪುರಾತನ ಕಾದಲ್ಲಿ ಆಳಿ-ಅಳಿದ ರಾಜಮನೆತನಗಳಾದ ಕದಂಬ, ಹೊಯ್ಸಳ, ರಾಷ್ಟ್ರಕೂಟ, ಗಂಗಾ, ಚಾಲುಕ್ಯ, ಬಹಮನಿ, ಸಂಗಮು, ಶಾತವಾಹನ, ಯದುಕುಲ ಮತ್ತು ವಿಜಯನಗರ ಎಂಬ ಹೆಸರನ್ನಿಡಲಾಗಿದೆ. ಇದರಲ್ಲಿ ಬರೇ 44 ಕೋಣೆಗಳು ಮಾತ್ರ ಇವೆ.
ರೈಲಿನಲ್ಲಿ ಎರಡು ಹೊಟೇಲ್ಗಳು, ಲೌಂಜ್ ಬಾರ್, ಸಭಾಂಗಣ, ಜಿಮ್ ಮತ್ತು ಸ್ಪಾ ಸೌಲಭ್ಯಗಳನ್ನು ಒಳಗೊಂಡಿದೆ. ರೈಲಿನ ಪ್ರಯಾಣಿಕರಿಗೆ ಅಂತರ್ಜಾಲ, ಉಪಗ್ರಹ ಆಧಾರಿತ ಮೊಬೈಲ್ ಸೇವೆ, ಟಿವಿ ಸೇವೆಗಳು ಲಭ್ಯವಿದೆ.
ಇದು ಅತ್ಯಂತ ಅಪೂರ್ವ ಸೌಂದರ್ಯದ ಒಳಾಂಗಣವನ್ನು ಹೊಂದಿದೆ. ಈ ರೈಲು ಕರ್ನಾಟಕದ  ಪ್ರಾಗೈತಿಹಾಸಿಕ ಸ್ಥಳಗಳು ಸೇರಿದಂತೆ ಕಬಿನಿ, ಮೈಸೂರು, ಬೇಲೂರು, ಹಳೆಬೀಡು, ಹಂಪೆ, ಐಹೊಳೆ ಪಟ್ಟದ ಕಲ್ಲು, ಬಾದಾಮಿ, ಗೋವಾ, ಬೆಂಗಳೂರಿನವರೆಗೆ ಪಯಣ.


ಇದರಲ್ಲಿ ಕೊಡಗಿನ ಸಾಂಪ್ರಾದಾಯಿಕ ಉಡುಪು(ಕುಪ್ಯಚೇಲೆ) ಯನ್ನು ಹೋಲುವ ಧಿರಸು ತೊಟ್ಟ ಸೇವಕರು ತಮ್ಮ ಸೇವೆ ಮಾಡಲು ಸಿದ್ಧರಿರುತ್ತಾರೆ.



ಇದರಲ್ಲಿ ಬಹುತೇಕವಾಗಿ ವಿದೇಶಿ ಪ್ರವಾಸಿಗರು ಪ್ರಯಾಣಿಸುತ್ತಾರೆ. ಇದರಲ್ಲಿ ಪಯಣಿಸುವವರಿಗೆ ಅಪ್ಪಟ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳು, ವಿವಿಧ ಭಕ್ಷ್ಯಭೋಜನಗಳು ಸಹಾ ದೊರೆಯುತ್ತದೆ.
ಇದರಲ್ಲಿ ಪಯಣಿಸುವವರು ರಾಜ ವೈಭೋಗದಂತಹ ಸೇವೆಯನ್ನು ಪಡೆಯುವರು. ಅಂದಹಾಗೆ ಇದರಲ್ಲಿ ಏಳುದಿನಗಳ ಪ್ರವಾಸಕ್ಕೆ ಒಬ್ಬರಿಗೆ 82 ಸಾವಿರ, ಇಬ್ಬರಿಗೆ 3ಲಕ್ಷದ  8 ಸಾವಿರ, ಮೂವರಿಗೆ 3ಲಕ್ಷದ 36 ಸಾವಿರ ಪ್ರಯಾಣ ಶುಲ್ಕವನ್ನು ನಿಗದಿಪಡಿಸಲಾಗಿದೆ.
 ಇದರಲ್ಲಿ ಪ್ರಯಾಣ ಮಾಡಿ " ಸಗ್ಗದ ಸುಖ" ಪಡೆಯ ಬಯಸುವರು ಸಾಕಷ್ಟು ಮುಂಚಿತವಾಗಿಯೇ ತಮ್ಮ ಸೀಟ್ಗಳನ್ನು ಕಾದಿರಿಸಬೇಕು.



ಮಂಗಳವಾರ, ಫೆಬ್ರವರಿ 28, 2017

ಬಾರೋ ಬಾರೋ ಮಳೆರಾಯ ಎಂದು ಕರೆಯುವ ಕೃಷಿಕ

                            ಹೂ ಅರಳಿದರೂ ಮುದುಡಿದ ಮನ. . .!


                                              ವಿಶೇಷ ವರದಿ_ ಕೂಡಂಡ ರವಿ










ಭಾರತದ ಕೃಷಿಕನ ಜೊತೆ ಮಳೆರಾಯ ಜೂಜಾಡುತ್ತಿದ್ದಾನೆ ಎಂಬ ಮಾತು ಜಿಲ್ಲೆಯ ಕಾಫಿ ಬೆಳೆಗಾರರ ಪಾಲಿಗೆ ಅಕ್ಷರಶಃ ನಿಜವಾಗಿದೆ. ವಾಡಿಕೆಯ ಮಳೆ ಈ ಬಾರಿ  ಸಾಕಷ್ಟು ಮುಂಚಿತವಾಗಿ ಸುರಿದಿದೆ. ಒಂದೆಡೆ ಬಂದ ಫಸಲನ್ನು ಕೊಯ್ಲು ಮಾಡುವುದೋ  ಎಂಬ ಗೊಂದಲದಲ್ಲಿಯೇ  ಮುಂದಿನ ಫಸಲಿನ ನಿರೀಕ್ಷೆಗಾಗಿ  ಭರ್ಜರಿ  ಸಿದ್ಧತೆ ಮಾಡಿಕೊಳ್ಳುವುದೋ ಎಂಬ  ತ್ರಿಶಂಕು ಸ್ಥಿತಿಯಲ್ಲಿ ಬೆಳೆಗಾರನಿದ್ದಾನೆ. ಇತ್ತೀಚೆಗೆ  ಬಿದ್ದ ಅಕಾಲಿಕ ಮಳೆಯ ಪರಿಣಾಮ ಬೆಳೆಗಾರರು ಅಡಕತ್ತರಿಗೆ ಸಿಲುಕಿದ್ದಾರೆ. ಒಂದು ಕಡೆ ಕಾಫಿ ಕೊಯ್ಲಿನ ಪರದಾಟ ಮತ್ತೊಂದು ಆಕಾಶದೆಡೆ ನಿರಂತರ ವೀಕ್ಷಣೆಯ ಮಧ್ಯೆ ಕೊಡಗಿನ ಬೆಳೆಗಾರಿದ್ದಾರೆ.


ಇನ್ನೂ ಬಾರದ ಹಿಮ್ಮಳೆ
ವಾಡಿಕೆಯ ಮಳೆಯು ಮುಂದಾಗಿ ಆಗಮಿಸಿರುವುದರಿಂದ ಸಕಾಲಿಕವಾಗಿ ಹಿಮ್ಮಳೆ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.  ಅದರಂತೆ ಈವರೆಗೂ ಮತ್ತೆ ಮಳೆಯಾಗಿಲ್ಲ. ಅರೆಬರೆ ಮಳೆಯಾದ ಕಡೆ ಬೆಳೆಗಾರರು ತುಂತುರು ನೀರಾವರಿ ಮಾಡುತ್ತಿರುವುದು ಜಿಲ್ಲೆಯ ಕೆಲವೆಡೆಗಳಲ್ಲಿ ಗೋಚರವಾಗಿದೆ. ಹೂಮಳೆ ಬಿದ್ದು ಸುಮಾರು ಒಂದು ತಿಂಗಳು ಸಮೀಪಿಸುತ್ತಿದ್ದರೂ, ಹಿಮ್ಮಳೆಯೇ ಇನ್ನೂ ಗೋಚರವಾಗದಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಮಳೆಯ ಪರಿಣಾಮ ಹೂ  ಮುಂದುವರಿದಿರುವುದರಿಂದ ಕಾಫಿ  ಕೊಯ್ಲಿಗೆ ತೀವ್ರ ಹಿನ್ನಡೆಯಾಗಿತ್ತು.
ನೀರಾವರಿಗೆ ಸಕಲ ರೀತಿಯಲ್ಲಿ ಸಿದ್ಧರಾದ ಬೆಳೆಗಾರರು ಈಗಾಗಲೇ ಹಲವೆಡೆಗಳಲ್ಲಿ ತುಂತುರು ನೀರಾವರಿ ಹನಿಸಲು ಆರಂಭಿಸಿದ್ದಾರೆ.  ಕಾಫಿ ಕೊಯ್ಲು ಮುಗಿಯದ ಕಾರಣ ಹಲವಾರು ಬೆಳೆಗಾರರು ನೀರಾವರಿ ಮಾಡುತ್ತಿರುವ ಕೃಷಿಕರನ್ನು ಕಂಡು ಕೈಹಿಸುಕಿಕೊಳ್ಳಲಾರಂಭಿಸಿದ್ದಾರೆ



ಧರಾಶಾಹಿಯಾಗುತ್ತಿರುವ ಕಾಫಿ
ಹೆಚ್ಚು ಬಿಸಿಲು ಬೀಳುವ ಕಡೆಗಳಲ್ಲಿ ಕಾಫಿ ಹಣ್ಣು ಮಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು.  ಆ ಸಮಯಕ್ಕೆ ಸರಿಯಾಗಿ ಮಳೆ ಬಂತು. ಪರಿಣಾಮ ಕಪ್ಪು ಬಣ್ಣಕ್ಕೆ ತಿರುಗಿದ ಕಾಫಿ ಮಳೆ ಬಂದು ಒಂದೆರಡು ದಿನಗಳ ತರುವಾಯ ಉದುರಲಾರಂಭವಾಯಿತು. ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯ ಪರಿಣಾಮ ಕಪ್ಪು ಬಣ್ಣಕ್ಕೆ ತಿರುಗಿದ ಕಾಫಿ ಸಂಪೂರ್ಣ ಧರಾಶಾಹಿಯಾಗುತ್ತಿದೆ. ಇನ್ನೂ ಹೆಚ್ಚಾಗಿ ಹಣ್ಣಾಗಿರುವ ಕಾಫಿ ಅಕಾಲಿಕ ಮಳೆಯ ಪರಿಣಾಮ ಒಣಗಿ ನೆಲಕ್ಕೆ ಉರುಳುತ್ತಿರುವುದು ಗೋಚರವಾಗಿದೆ. ಪರಿಣಾಮ ಕಾಫಿ ಗಿಡದಲ್ಲಿರುವುದಕ್ಕಿಂತ ಹೆಚ್ಚು ಕಾಫಿ ನೆಲದಲ್ಲಿಯೂ ಗೋಚರವಾಗುತ್ತಿದೆ.



ಶೇ. 10-20 ಹೂ ಬಾಕಿ
 ಅಕಾಲಿಕ ಮಳೆಯ ಪರಿಣಾಮ ಕಾಫಿ ತೋಟದಲ್ಲಿನ ಶೇ. 50 ಭಾಗ ಹೂ ಅರಳಿದ್ದು, ಅಷ್ಟೇ ಪ್ರಮಾಣದ ಹೂ ಅರಳಲು ಬಾಕಿ ಇದೆ. ಅರಳಿದ ಹೂವಿಗೆ ಕಾಯಿ ಕಟ್ಟಲು ಸಕಾಲಿಕ ಮಳೆ ಬೇಕಾಗಿದೆ. ನೆಲಕ್ಕುರುಳಿದ ಕಾಫಿಯನ್ನು ಆರಿಸುವುದು ಬೆಳೆಗಾರರಿಗೆ ತ್ರಾಸದಾಯವೆನಿಸಲಿದೆ. ಒಂದೆಡೆ ನೆಲಕ್ಕುರುಳಿರುವ ಕಾಫಿ ಆರಿಸುವುದೋ, ಮತ್ತೊಂದೆಡೆ ಮುಂದಿನ ವರ್ಷದ ಕಾಫಿ ಫಸಲಿಗಾಗಿ ತುಂತುರು ನೀರು ಹಾಯಿಸುವುದೋ ಎಂದು ಕೆಲವರು ಗೊಂದಲದಲ್ಲಿದ್ದಾರೆ. ಮತ್ತೆ ಕೆಲವರು ನೀರು, ಯಂತ್ರೋಪಕರಣ, ಆಳು-ಕಾಳು ಇದ್ದವರು ನೀರಾವರಿ ಮಾಡುವಲ್ಲಿ ತಲ್ಲೀನರಾಗಿರುವರು.


ಮಳೆ ಬೇಗನೇ ಬಂದಿದ್ದು ಕೆಲವರಿಗೆ ಅನಾನುಕೂಲವಾದರೂ, ಬಹುತೇಕ ಮಂದಿಗೆ ಪ್ರಯೋಜನವಾಗಿದೆ. ನೀರಿನಾಶ್ರಯವಿರುವವರು ಮತ್ತೆ ತುಂತುರು ನೀರಾವರಿ ಮಾಡಿದ್ದಲ್ಲಿ ಕಾಫಿ ಕಾಯಿ ಕಟ್ಟಲು ಸಹಕಾರಿಯಾದೀತು. ಮತ್ತೇ ಮಳೆ ಬಂದರೆ ಎಲ್ಲರಿಗೂ ಅನುಕೂಲ.
 ನೆರವಂಡ ರವಿ, ಕಾಫಿ ಬೆಳೆಗಾರ, ಹೊದ್ದೂರು


ಮಳೆಯು ಯಾವಾಗ ಮತ್ತೆ ಬರುವುದೆಂದು ಕಾಯುವುದು ಕಷ್ಟ. ನಮ್ಮ ಬಳಿ ನೀರಿದೆ, ಯಂತ್ರವೂ ಇದೆ.  ಆಳು ಕಾಳುಗಳಿದ್ದಾರೆ. ಅದುದರಿಂದ ತುಂತುರು ನೀರಾವರಿ ಆರಂಭಿಸಿದ್ದೇವೆ. ಮಳೆ ಮತ್ತೊಮ್ಮೆ  ಜನತೆಯ ಅಪಾರ ಹಣ ಉಳಿಯುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಗಳು ಆರಂಭವಾಗಿರುವುದರಿಂದ ಮಳೆಯ ನಿರೀಕ್ಷೆಯಲ್ಲಿರುವೆವು
ಚೌರೀರ ಸಿ ದೇವಯ್ಯ,  ಕಾಫಿ ಬೆಳೆಗಾರ, ಹೊದ್ದೂರು.


ಮಳೆಯನ್ನೇ ಕಾಯದೇ ಬೇಗನೇ ತುಂತುರು ನೀರಾವರಿ ಕೆಲಸ ಮುಗಿಸಬೇಕೆಂದು ನಮ್ಮ ತೋಟದ ಮಾಲೀಕರು ನಿರ್ದೇಶನ ನೀಡಿದ್ದಾರೆ. . ಅದರಂತೆ ಕಳೆದ ಕೆಲವು ದಿನಗಳಿಂದ ಹಗಲಿರಳೂ ನಿರಂತರವಾಗಿ ನೀರಾವರಿ ಕೆಲಸದಲ್ಲಿ ತೊಡಗಿದ್ಧೇವೆ.


ಕಾಫಿ ತೋಟದ ಮೇಲ್ವಿಚ್ಛಾರಕ, ಮೂರ್ನಾಡು.