ಶನಿವಾರ, ಅಕ್ಟೋಬರ್ 6, 2018

ಉಚಿತ ಸಿರಿಧಾನ್ಯಗಳ ಬೀಜ ವಿತರಣೆ

ಪ್ರಕೃತಿ ಪರಿಸರ 

ಉಚಿತ  ಸಿರಿಧಾನ್ಯಗಳ ಬೀಜ ವಿತರಣೆ

 ಬರಹ: ಕೂಡಂಡ ರವಿ, ಹೊದ್ದೂರು. 


ಸಿರಿಧಾನ್ಯದ ಬೀಜಗಳನ್ನು ಉಚಿತವಾಗಿ  ಆಸಕ್ತರಿಗೆ  ನೀಡಲು ಹಾಸನ ಜಿಲ್ಲೆಯ ಅರಕಲಗೋಡಿನ  ಕಾರಂಜಿ ಟ್ರಸ್ಟ್ ಸಂಸ್ಥೆಯು ಮುಂದೆ ಬಂದಿದೆ.   ಸಂಸ್ಥೆಯು ಪ್ರೀತಿ'ಸಿರಿ' ಕಾರ್ಯಕ್ರಮದ ಮೂಲಕ ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೊರಲೆ, ರೊಟ್ಟಿ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ ಮುಂತಾದ ಬೀಜಗಳನ್ನು ನೀಡಲಿರುವರು. ಅವುಗಳನ್ನು ಬೆಳೆದು ಸಿರಿಧಾನ್ಯಗಳ ಪರಿಚಯದ ಜೊತೆಗೆ ಅವುಗಳ ಮಹತ್ವಗಳ ಬಗ್ಗೆ ಮಾಹಿತಿ,  ಅವುಗಳನ್ನು ಹಕ್ಕಿಗಳಿಗೆ ಆಹಾರವಾಗಿ ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ಧೇಶವಾಗಿದೆ.

Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com




ಪಕ್ಷಿಗಳ ಪ್ರೀತಿ
ನಮ್ಮ ಪರಿಸರದಲ್ಲಿ ಹಕ್ಕಿಗಳು ಅವಿಭಾಜ್ಯ ಅಂಗವಾಗಿವೆ. ಅವುಗಳು ಪರಿಸರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಸಮೀಕ್ಷಾ ಮಾಹಿತಿಯ ಪ್ರಕಾರ  ಸದ್ಯ ಭೂಮಿಯ ಮೇಲಿರುವ ಪಕ್ಷಿಗಳಲ್ಲಿ 70%ದಷ್ಟು ತಿನ್ನಲು ಸಾಕಿರುವ ಕೋಳಿಗಳೇ ! ಇನ್ನುಳಿದ 30%ದಷ್ಟು ಮಾತ್ರ ಹತ್ತು ಸಾವಿರಕ್ಕೂ ಮಿಗಿಲಾಪಕ್ಷಿಗಳ ಮಹತ್ವ ನೋಡಿದರೆ ನಮಗೆ ಜೀವ ವೈವಿಧ್ಯತೆಯ ಮಹತ್ವ ಅರಿವಾಗುವುದು !  ಪಕ್ಷಿಗಳು ಬೀಜ ಪ್ರಸರಣೆ ಮಾಡುತ್ತವೆ. ಬೆಳೆಗಳಲ್ಲಿ ಕೀಟ ನಿಯಂತ್ರಿಸುತ್ತವೆ.  ಪರಾಗಸ್ಪರ್ಶ ಮಾಡುತ್ತವೆ.  ಪಕ್ಷಿಗಳ ಹಿಕ್ಕೆ ಒಳ್ಳೆಯ ಗೊಬ್ಬರ, ಪ್ರಕೃತಿಯಲ್ಲಿ ಸಮತೋಲನ ಕಾಪಾಡುತ್ತವೆ, ಮನುಷ್ಯನ ಎಷ್ಟೋ ಸಂಶೋಧನೆಗಳಿಗೆ ಪಕ್ಷಿಗಳೇ ಪ್ರೇರಣೆಯಾಗಿವೆಯಂತೆ !
ಕೈಗಾರೀಕರಣ, ನಗರೀಕರಣ, ಅರಣ್ಯನಾಶ, ರಾಸಾಯನಿಕ ಕೃಷಿ, ನೀರಿನ ಮೂಲಗಳ ನಾಶ, ಆಹಾರದ ಕೊರತೆ, ಆಧುನಿಕ ತಂತ್ರಜ್ಞಾನ, ಕಾಡ್ಗಿಚ್ಚು, ಅಕ್ರಮ ಬೇಟೆಗಾರಿಕೆ,  ಪ್ರಾಕೃತಿಕ ವಿಕೋಪಗಳು ನಮ್ಮ ಅಮೂಲ್ಯ ಪಕ್ಷಿ ಸಂಪತ್ತನ್ನು ನಾಶ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎನ್ನಬಹುದು. ನಿಧಾನವಾಗಿ ಪಕ್ಷಿ ಸಂಕುಲ ಕರಗುತ್ತಿರುವುದು ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಗಿವೆ.
ಇಂಪಾದ  ಹಕ್ಕಿಗಳ ಚಿಲಿಪಿಲಿ ಕಲರವ ಮನಸ್ಸಿಗೂ, ಹೃದಯಕೂ ಹಿತವೆನಿಸುತ್ತಿದೆ. ಹಲವಾರು ಕಣ್ಣುಗಳು ಹಕ್ಕಿಗಳನ್ನು ನೋಡಲು  ಕಾತರಿಸಿವೆ..! ನಮ್ಮಗಳ 'ಪ್ರಕೃತಿ ಇರುವುದೇ ಮನುಷ್ಯನ ಸುಖ ಜೀವನಕ್ಕಾಗಿ' ಎಂಬ ಅಹಂನಿಂದ  ಪರಿಸರವು ತನ್ನ ಸಮತೋಲನವನ್ನು ಕಳೆದು ಕೊಳ್ಳುತ್ತಿದೆ. ಇದಕ್ಕೆ ಹಕ್ಕಿಗಳ ನಾಶವೂ ಪ್ರಬಲ ಕಾರಣವಾಗಿರಲೂಬಹುದು.
 ಧಾನ್ಯಗಳ ಬಿತ್ತೋಣ ಬನ್ನಿ
ಸರಿ ! ಈಗ ಚಿಂತೆ, ವ್ಯಥೆ, ಆರೋಪಗಳನ್ನು ಬದಿಗಿಡೋಣ! ಹಕ್ಕಿಗಳಿಗಾಗಿ ನಾವೆಲ್ಲರೂ ಸೇರಿ ಏನಾದರೂ ಮಾಡೋಣ. ಈಗಾಗಲೇ ಬಿಸಿಲಿನ  ಝಳ  ಜೋರಾಗಿದೆ. ಮುಂದೆ ಭೀಕರ ಬೇಸಿಗೆ ದಿನಗಳಿವೆ. ನಾವು ಈಗ ಸ್ವಲ್ಪ ಎಚ್ಚರಗೊಂಡು ನಮ್ಮ ಮನೆಯಂಗಳದಲ್ಲಿ ಪಕ್ಷಿಗಳಿಗೆಂದು ನವಣೆ, ಸಾಮೆ, ಸಜ್ಜೆ, ಕೊರಲೆ ಮೊದಲಾದ ಸಿರಿಧಾನ್ಯಗಳನ್ನ, ಸೂರ್ಯಕಾಂತಿಯನ್ನ ಬಿತ್ತೋಣ ! ಕುಡಿಯಲು ನೀರಿಡೋಣ ! ಹೀಗೇ ಮಾಡುವುದರಿಂದ ಹಸಿವು ಮತ್ತು ಬಾಯಾರಿಕೆಯಿಂದ ಸಾಯೋ ಎಷ್ಟೊ ಪಕ್ಷಿಗಳ ಪ್ರಾಣ ಉಳಿಸಬಹುದು !  ಈ ಉದ್ಧೇಶದಿಂದಲೇ ಸಿರಿಧಾನ್ಯದ ಬೀಜಗಳನ್ನು ಉಚಿತವಾಗಿ  ಆಸಕ್ತರಿಗೆ  ನೀಡಲು ಹಾಸನ ಜಿಲ್ಲೆಯ ಅರಕಲಗೋಡಿನ  ಕಾರಂಜಿ ಟ್ರಸ್ಟ್ ಸಂಸ್ಥೆಯು ಮುಂದೆ ಬಂದಿದೆ !  ಸಂಸ್ಥೆಯು ಪ್ರೀತಿ'ಸಿರಿ'ಯ ಮೂಲಕ ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೊರಲೆ, ರೊಟ್ಟಿ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ ಮುಂತಾದ ಬೀಜಗಳನ್ನು ನೀಡಲಿರುವರು.
ಸಿರಿಧಾನ್ಯದಿಂದ ಲಾಭ 
ಸಿರಿಧಾನ್ಯ ಬಿತ್ತುವುದರಿಂದ ಅವುಗಳ ಮಹತ್ವವು ಮಕ್ಕಳಿಗೆ,  ಹಿರಿಯರಿಗೆ ತಿಳಿಯಲಿದೆ. ಈ ಧಾನ್ಯಗಳು ಹಲವಾರು ಕಾಯಿಲೆಗಳಿಗೆ ದಿವ್ಯೌಷಧಿಯೂ ಹೌದು. ಅತ್ಯಂತ ಕಡಿಮೆ ನೀರಿನಲ್ಲಿ ಮನೆಯಂಗಳವನ್ನು ಹಸಿರಾಗಿಸಬಹುದು. ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಬೇಸಿಗೆಯಲ್ಲಿ ಮನೆಯಂಗಳವು ಹಸಿರಾಗಿದ್ದು, ಮನೆಯ ತಂಪಾಗಿರುವುದು. ಸೂರ್ಯಕಾಂತಿ ಹೂವು ಅರಳಿ ಮನಕ್ಕೆ ಮುದ ನೀಡಲಿದೆ. ಮಿಗಿಲಾಗಿ ಮನೆಯಂಗಳದಲ್ಲಿ ಗುಬ್ಬಚ್ಚಿ, ಗಿಜುಗ, ಗಿಳಿ, ಪಾರಿವಾಳ ಮೊದಲಾದ ನಿಸರ್ಗ ಸಂಗೀತ ವಿದ್ವಾಂಸರಿಂದ ಮನಮೋಹಕ ಸಂಗೀತ ಕಛೇರಿಯನ್ನು ಮನೆಯಂಗಳದಲ್ಲಿ ಕಾಣಬಹುದು. ಕೇಳಬಹುದು.
ಬನ್ನಿ, ಪ್ರಕೃತಿ ಪ್ರೀತಿ ಸಿರಿಯನ್ನು ಪುಟಾಣಿ ಮಕ್ಕಳ  ಮನದಲ್ಲಿ ಬಿತ್ತಲು ಇದು ಸುವಣರ್ಾವಕಾಶ. ನಮ್ಮ ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿ. ಅವರಿಗೂ ಹಕ್ಕಿಗಳ ಮಹತ್ವದ ಅರಿವು ಅನ್ನು ನೀಡಬಹುದು. ಹಕ್ಕಿಗಳಿಗೆ ಆಹಾರವಾಗುವ ಸಿರಿಧಾನ್ಯಗಳನ್ನು ಶಾಲಾ ಕಾಲೇಜು, ಮನೆ, ಮಠ, ಮಂದಿರ, ಮಸೀದಿ ಚಚರ್್ಗಳ ಅಂಗಳದಲ್ಲಿ ಬೆಳೆಯೋಣ ಬನ್ನಿ.  ಈ ಮಹತ್ಕಾರ್ಯಕ್ಕೆ ಪುಟಾಣಿಗಳನ್ನೂ ಪ್ರೇರೇಪಿಸೋಣ, ಹಕ್ಕಿಗಳ ಚಿಲಿಪಿಲಿ ದನಿಗೆ ಕಿವಿಯಾಗೋಣ ಬನ್ನಿ. ಇದು ವೈಶಿಷ್ಟ್ಯಪೂರ್ಣ ಕಾರ್ಯವಾಗಿದ್ದು, ಸಂಸ್ಥೆಯು ಫಲಾಪೇಕ್ಷೆಯಿಲ್ಲದೇ ಇದಕ್ಕೆ ಮುಂದಾಗಿದೆ. ಈ ಕೆಲಸವು ಅನುಕರಣನೀಯ, ಅಭಿನಂದನೀಯ ಎಂಬುವುದರಲ್ಲಿ ಎರಡು ಮಾತಿಲ್ಲ. ಇಂತಹ ಕಾರ್ಯಗಳಿಗೆ ನಾವು-ನೀವು ಕೈಜೋಡಿಸೋಣ. ಮುಂದಿನ ಪೀಳಿಗೆಗೆ ಹಕ್ಕಿಗಳ ಮಹತ್ವವನ್ನು ಸಾರಿ ಹೇಳೋಣ. ಅವುಗಳನ್ನು ಉಳಿಸಲು ಕೈಲಾದ ಪ್ರಯತ್ನ ಮಾಡೋಣ. 

ಸಿರಿಧಾನ್ಯಗಳನ್ನು ತಮ್ಮ ಶಾಲಾ ಕಾಲೇಜುಗಳ ವಿದ್ಯಾಥರ್ಿಗಳಿಗೆ, ಸಾರ್ವಜನಿಕರಿಗೆ ಪರಿಚಯಿಸಿ, ಅವುಗಳನ್ನು ಬಿತ್ತಿ ಬೆಳೆಯಲು ಬಯಸುವವರು, ಸಂಘ-ಸಂಸ್ಥೆಗಳು ತಮ್ಮ ವಿಳಾಸವನ್ನು 8792605846, 9591066583 ವಾಟ್ಸಾಪ್ ಸಂಖ್ಯೆಗಳಿಗೆ ಸಂದೇಶ ರವಾನಿಸಬಹುದು. 








ೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ